ಸ್ನೇಹಿತರೆ
ಇತ್ತೀಚಿನ ದಿನದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಯಾವ ಭಾಷೆಯಲ್ಲಿ ಬೋಧನೆ ಮಾಡಬೇಕು ಎಂಬ ಗೊಂದಲ ಹೈಕೋರ್ಟ್ ಮತ್ತು ರಾಜ್ಯಸರ್ಕಾರದ ಮುಸುಕಿನ ಗುದ್ದಾಟದ ನಂತರ ಈಗ ಚೆಂಡು ಸುಪ್ರಿಂ ಕೋರ್ಟ್ ಅಂಗಳದಲ್ಲಿ ಬಿದ್ದಿದೆ ಮತ್ತು ಪೋಷಕರಿಗೆ ಅವರ ಮಕ್ಕಳಿಗೆ ಯಾವ ಮಾದ್ಯಮದಲ್ಲಿ ಕಲಿಸಬೇಕು ಎಂಬ ಬಗ್ಗೆ ಅವರಿಗೆ ಸ್ವಾತಂತ್ರ್ಯ ಕೊಡಿ ಅಂತ ನಿರ್ದೇಶನ ನೀಡಿದೆ .ಆದರು ಕನ್ನಡ ಸಾಹಿತಿಗಳು ಮತ್ತೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಬೊಧನೆಗೆ ನಿರ್ದೇಶನ ನೀಡಬೇಕೆಂದು ಮತ್ತೆ ಮನವಿ ಸಲ್ಲಿಸಿದ್ದಾರೆ .ಶಿಕ್ಷಣ ಸಚಿವರು ಈ ಬಗ್ಗೆ ಕೇಂದ್ರ ಸರ್ಕಾರ ಮದ್ಯ ಪ್ರವೇಶಿಸ ಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಗಳನ್ನೂ ಹೇಳಲು ಬಯಸುತ್ತೇನೆ
ವಿಶ್ವದ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆಗಳಲ್ಲಿ ಕನ್ನಡ ಭಾಷೆ ೨೭ನೆ ಸ್ಥಾನ ಪಡೆದಿದೆ .ಭಾರತ ಸಂವಿದಾನದಲ್ಲಿ ಕನ್ನಡ ಅಧಿಕೃತ ಭಾಷೆಯೆಂದು ಮಾನ್ಯತೆ ಪಡೆದಿದೆ .ಇತ್ತೀಚಿಗೆ ಶಾಸ್ತ್ರಿಯ ಸ್ಥಾನಮಾನವು ದೊರಕಿದೆ ಕರ್ನಾಟಕ ರಾಜ್ಯದಲ್ಲಿ ಆಡಳಿತ ಭಾಷೆಯಾಗಿದೆ .ಆದರು ಸಹ ಒಂದು ಅಂದಾಜಿನ ಪ್ರಕಾರ ಬಹುಬೇಗ ನಶಿಸಿ ಹೊಗುತ್ತಿರುವ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದಾಗಿದೆ .ಇದೆ ವೇಗದಲ್ಲಿ ಇದು ಮುಂದುವರೆದರೆ ಇನ್ನು ೫೦ ವರ್ಷಗಳಲ್ಲಿ ಕನ್ನಡ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಅಭಿಪ್ರಾಯ ಪಡಲಾಗಿದೆ ....ಸುಮಾರು ೨೦೦೦ ಸಾವಿರ ವರ್ಷಗಳ ಇತಿಹಾಸವಿರುವ ಒಂದು ಭಾಷೆಗೆ ಈ ಸ್ಥಿತಿ ಬರಲು ಕಾರಣವೇನೆಂದು ಕೆದಕುತ್ತ ಹೋದರೆ ನಮ್ಮೆಲ್ಲರ ನಿರ್ಲಕ್ಷ್ಯತೆ ಕಂಡುಬರುತ್ತದೆ . ಒಂದು ಕಡೆ ನಮ್ಮ ಭಾಷೆಗೆ ಒದಗಿರುವ ಈ ಸ್ಥಿತಿಗೆ ಮರುಗಿದರೆ ಇನ್ನೊದು ಕಡೆ ವಾಸ್ತವದಲ್ಲಿ ಇದು ಅನಿವಾರ್ಯವೇನೋ ಎಂಬ ಸ್ಥಿತಿಯಲ್ಲಿ ಈಗ ನಾವಿದ್ದೇವೆ ....
ಒಬ್ಬ ಗ್ರಾಮೀಣ ಕನ್ನಡ ಮದ್ಯಮದಿಂದ ಬಂದ ನನ್ನಂಥ ಹಲವರು ಅಭ್ಯರ್ಥಿಗಳು ಕನ್ನಡ ಮಾದ್ಯಮದಲ್ಲಿ ಓದಿದ್ದೆ ತಪ್ಪಾಯ್ತೇನೋ ಎಂದು ಬಹಳ ಸಾರಿ ಅನ್ನಿಸಿದೆ .ಯಾಕೆಂದರೆ ನಮ್ಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ಶಿಕ್ಷಕರು ಒಂದು ಸಾರಿ ಇಂಗ್ಲಿಷ್ ಪಠ್ಯ ಓದಿ ಯಾವುದೊ ಗೈಡ್ ನೋಡಿಕೊಂಡು ಒಮ್ಮೆಲೇ ಭಾವಾರ್ಥ ಓದಿ ಹೇಳಿ ಪಾಠ ಮುಗಿಸುತ್ತಿದ್ದರು .ಇಂಗ್ಲಿಷಿನ ಮುಲಪದಗಳನ್ನು ಪದಗಳನ್ನು ಕಲಿಯುವುದಕ್ಕೆ ಕಾಲೇಜಿನ ಮೆಟ್ಟಿಲೇರಬೇಕಾಯಿತು ..ಕನ್ನಡ ಮಾದ್ಯಮದಲ್ಲಿ ಓದಿ ಪಿಯುಸಿ ಗೆ ಬಂದು ವಿಜ್ಞಾನ ವಿಷಯವನ್ನು ಅಇಚ್ಚಿಕ ವಾಗಿ ತೆಗೆದುಕೊಂಡರೆ ಒಮ್ಮೆಲೇ ಕುದಿಯುವ ಬಾಣಲೆಗೆ ಬಿದ್ದಂಥ ಅನುಭವವಾಗುತ್ತದೆ ...
ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಬರಿಯ ಕನ್ನಡ ಭಾಷೆ ಒಂದು ಗೊತ್ತಿದ್ದರೆ ಬಾಳುವೆ ಮಾಡಲು ಸಾದ್ಯವಿಲ್ಲ ..ಅದು ಅಲ್ಲದೆ ಉದ್ಯೋಗವಕಶವು ಕಡಿಮೆ ..ಕನ್ನಡ ಮಾದ್ಯಮದಲ್ಲಿ ಓದಿದವರಿಗೆ ಒಂದು ರೀತಿಯ ಕೀಳರಿಮೆ ಬಂದುಬಿಡುತ್ತದೆ ...ಆಶ್ಚರ್ಯವೆಂದರೆ ಇಂದಿನ ಸ್ಥಿತಿಯಲ್ಲಿ ಯಾವ ಸ್ವಾಭಿಮಾನಿ ಕನ್ನಡಿಗನು ಕನ್ನಡ ಮಾದ್ಯಮದಲ್ಲಿ ಓಡಿಸಲು ದೈರ್ಯ ಮಾಡಲಾರ ..ಎಂಥಹ ಬಡವನಾದರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾದ್ಯಮದಲ್ಲಿ ಓದಿಸಲು ಪ್ರಯತ್ನಿಸುತ್ತಾನೆ ...
ಈ ನಾಡಿನ ಹಲವು ಕನ್ನಡಪರ ಹೋರಾಟಗಾರರು ,ಸಾಹಿತಿಗಳು ,ರಾಜಕಾರಣಿಗಳು ಕನ್ನಡದ ಉಳಿವಿನ ಬಗ್ಗೆ ಗಂಟೆ ಗಟ್ಟಲೆ ಭಾಷಣ ಬಿಗಿಯುತ್ತಾರೆ ಆದರೆ ಅವರಲ್ಲಿ ಎಷ್ಟುಜನ ತಮ್ಮ ಮಕ್ಕಳನ್ನು ಸರ್ಕಾರೀ ಶಾಲೆಯ ಕನ್ನಡ ಮಾದ್ಯಮದಲ್ಲಿ ಓದಿಸುತ್ತಿದ್ದಾರೆ? ಎಲ್ಲ ಉಳ್ಳವರು ,ಉತ್ತಮ ಇಂಗ್ಲಿಷ್ ಮಾದ್ಯಮದ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುತ್ತಿದ್ದಾರೆ ಆದರೆ ಕನ್ನಡ ಮಾದ್ಯಮದಲ್ಲಿ ಓದಿದ ವಿಧ್ಯಾರ್ಥಿಗಳು ಡಿಗ್ರಿ, ಡಬಲ್ ಡಿಗ್ರಿ ಓದಿದ್ದರು ಇಂಗ್ಲಿಷ್ ಭಾಷಾ ಮಾದ್ಯಮದ ಕೊರತೆಯಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹೆಣಗುತ್ತಿದ್ದಾರೆ.ಕೇವಲ ಗುಮಾಸ್ತ ಹುದ್ದೆಗೆ ಲಾಯಕ್ಕೆನೋ ಎಂಬಂಥ ವಾತಾವರಣ ಸೃಷ್ಟಿಸಲಾಗಿದೆ ...
ಕೇವಲ ಬಡವರು ಮತ್ತು ಸರ್ಕಾರೀ ಶಾಲೆಯಲ್ಲಿ ಓದುವವರು ಮಾತ್ರ ಯಾಕೆ ಕನ್ನಡ ಮಾದ್ಯಮದಲ್ಲಿ ಓದಬೇಕು?ನಮ್ಮ ಆಳುವ ವರ್ಗ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು "ನೀನು ಹೊಡೆದ ಹಾಗೆ ನಟಿಸು, ನಾನು ಅತ್ತ ಹಾಗೆ ನಟಿಸುತ್ತೇನೆ " ಎಂಬಂತೆ ವರ್ತಿಸುತ್ತಿವೆ ..ಇಂದಿನ ವ್ಯವಸ್ಥೆಯಲ್ಲಿ ಕನ್ನಡವನ್ನು ಪ್ರಾಮಾಣಿಕವಾಗಿ ಕಲಿಸುವ ಬದ್ದತೆಯನ್ನು ಶಿಕ್ಷಣ ಸಂಸ್ಥೆಗಳು ಪ್ರದರ್ಶಿಸಬೇಕಿದೆ ,ಅದೇ ರೀತಿ ಸರ್ಕಾರಗಳು ಕನ್ನಡವನ್ನು ಎಲ್ಲ ರಂಗಗಳಲ್ಲೂ ಅಳವಡಿಸಿ ಕನ್ನಡ ಕಲಿತವರಿಗೆ ಅವಕಾಶವನ್ನು ಕಲ್ಪಿಸಬೇಕಾಗಿದೆ .ಯುರೋಪಿನ ಹಲವಾರು ದೇಶಗಳು ತಮ್ಮ ಆಡಳಿತದಲ್ಲಿ ಸ್ಥಳೀಯ ಭಾಷೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿವೆ ಅದು ನಮ್ಮಲ್ಲೇಕೆ ಸಾದ್ಯವಿಲ್ಲ ಎನಿಸುತ್ತದೆ. ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡನ್ನು ಉತ್ತಮವಾಗಿ ಕಲಿಸಬೇಕಿದೆ ...ಇಲ್ಲವಾದರೆ ನಾವೆಷ್ಟೇ ಕನ್ನಡದ ಬಗ್ಗೆ ಅನುಕಂಪ ತೋರಿಸಿದರು ಅದು ಕೇವಲ ತೋರಿಕೆ ಎನಿಸುತ್ತದೆ,ಏಕೆಂದರೆ ಇಂದು ಕನ್ನಡವನ್ನು ಉಳಿಸಬೇಕಾದರೆ ಕನ್ನಡವನ್ನು ಅನ್ನವನ್ನು ದೊರಕಿಸಿಕೊಡುವ ಭಾಷೆಯನ್ನಾಗಿ ಮಾಡಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಇದೆ.
ಭಾಷೆ ಮತ್ತು ಅನ್ನ ಇವೆರಡನ್ನೂ ಒಂದು ಕಡೆ ಇಟ್ಟಾಗ ಮನುಷ್ಯ ಮೊದಲು ಅನ್ನವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಏಕೆಂದರೆ ಹಸಿವು ಭಾಷೆಗಿಂತ ಮುಖ್ಯ .ತನ್ನ ಹಸಿವು ನೀಗಿಸಿಕೊಳ್ಳಲು ಯಾವ ಭಾಷೆ ಅನುಕೂಲ ಮಾಡಿಕೊದುತ್ತದೋ ಆ ಭಾಷೆಯನ್ನು ಆತ ಆಯ್ಕೆ ಮಾಡುತ್ತಾನೆ . ರಾಷ್ಟ್ರ ಮಟ್ಟದಲ್ಲಿ "ಏಕರೂಪ ನಾಗರೀಕ ಸಂಹಿತೆ "ಒತ್ತಾಯಿಸುತ್ತಿರುವ ರಾಷ್ಟ್ರೀಯ ಪಕ್ಷಗಳು "ಏಕರೂಪ ಶಿಕ್ಷಣ ನೀತಿ"ಯನ್ನು ಯಾಕೆ ಒತ್ತಾಯಿಸುತ್ತಿಲ್ಲ .ಈ ಬಗ್ಗೆ ಎಲ್ಲರು ಚಿಂತಿಸಬೇಕಾದ ಅಗತ್ಯ ಇದೆ ...ಶಿಕ್ಷಣ ರಾಷ್ಟ್ರೀಕರಣವಾಗಲಿ ..ಕೇಂದ್ರ ಸರ್ಕಾರ ಇದರ ಬಗ್ಗೆ ಚಿಂತಿಸಲಿ ಮತ್ತು ಅಗತ್ಯ ಕಾನೂನು ರೂಪಿಸಲಿ..."ಎಲ್ಲರಿಗು ಸಮಬಾಳು ,ಸಮಪಾಲು"ದೊರಕಲು ಅವಕಾಶ ದೊರಕಿಸಲು ಆಳುವ ವರ್ಗಗಳು ಪ್ರಾಮಾಣಿಕ ಪ್ರಯತ್ನ ಮಾಡಲಿ.... ನೀವೇನ್ ಹೇಳ್ತಿರ ?
ಇತ್ತೀಚಿನ ದಿನದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಯಾವ ಭಾಷೆಯಲ್ಲಿ ಬೋಧನೆ ಮಾಡಬೇಕು ಎಂಬ ಗೊಂದಲ ಹೈಕೋರ್ಟ್ ಮತ್ತು ರಾಜ್ಯಸರ್ಕಾರದ ಮುಸುಕಿನ ಗುದ್ದಾಟದ ನಂತರ ಈಗ ಚೆಂಡು ಸುಪ್ರಿಂ ಕೋರ್ಟ್ ಅಂಗಳದಲ್ಲಿ ಬಿದ್ದಿದೆ ಮತ್ತು ಪೋಷಕರಿಗೆ ಅವರ ಮಕ್ಕಳಿಗೆ ಯಾವ ಮಾದ್ಯಮದಲ್ಲಿ ಕಲಿಸಬೇಕು ಎಂಬ ಬಗ್ಗೆ ಅವರಿಗೆ ಸ್ವಾತಂತ್ರ್ಯ ಕೊಡಿ ಅಂತ ನಿರ್ದೇಶನ ನೀಡಿದೆ .ಆದರು ಕನ್ನಡ ಸಾಹಿತಿಗಳು ಮತ್ತೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಬೊಧನೆಗೆ ನಿರ್ದೇಶನ ನೀಡಬೇಕೆಂದು ಮತ್ತೆ ಮನವಿ ಸಲ್ಲಿಸಿದ್ದಾರೆ .ಶಿಕ್ಷಣ ಸಚಿವರು ಈ ಬಗ್ಗೆ ಕೇಂದ್ರ ಸರ್ಕಾರ ಮದ್ಯ ಪ್ರವೇಶಿಸ ಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಗಳನ್ನೂ ಹೇಳಲು ಬಯಸುತ್ತೇನೆ
ವಿಶ್ವದ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆಗಳಲ್ಲಿ ಕನ್ನಡ ಭಾಷೆ ೨೭ನೆ ಸ್ಥಾನ ಪಡೆದಿದೆ .ಭಾರತ ಸಂವಿದಾನದಲ್ಲಿ ಕನ್ನಡ ಅಧಿಕೃತ ಭಾಷೆಯೆಂದು ಮಾನ್ಯತೆ ಪಡೆದಿದೆ .ಇತ್ತೀಚಿಗೆ ಶಾಸ್ತ್ರಿಯ ಸ್ಥಾನಮಾನವು ದೊರಕಿದೆ ಕರ್ನಾಟಕ ರಾಜ್ಯದಲ್ಲಿ ಆಡಳಿತ ಭಾಷೆಯಾಗಿದೆ .ಆದರು ಸಹ ಒಂದು ಅಂದಾಜಿನ ಪ್ರಕಾರ ಬಹುಬೇಗ ನಶಿಸಿ ಹೊಗುತ್ತಿರುವ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದಾಗಿದೆ .ಇದೆ ವೇಗದಲ್ಲಿ ಇದು ಮುಂದುವರೆದರೆ ಇನ್ನು ೫೦ ವರ್ಷಗಳಲ್ಲಿ ಕನ್ನಡ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಅಭಿಪ್ರಾಯ ಪಡಲಾಗಿದೆ ....ಸುಮಾರು ೨೦೦೦ ಸಾವಿರ ವರ್ಷಗಳ ಇತಿಹಾಸವಿರುವ ಒಂದು ಭಾಷೆಗೆ ಈ ಸ್ಥಿತಿ ಬರಲು ಕಾರಣವೇನೆಂದು ಕೆದಕುತ್ತ ಹೋದರೆ ನಮ್ಮೆಲ್ಲರ ನಿರ್ಲಕ್ಷ್ಯತೆ ಕಂಡುಬರುತ್ತದೆ . ಒಂದು ಕಡೆ ನಮ್ಮ ಭಾಷೆಗೆ ಒದಗಿರುವ ಈ ಸ್ಥಿತಿಗೆ ಮರುಗಿದರೆ ಇನ್ನೊದು ಕಡೆ ವಾಸ್ತವದಲ್ಲಿ ಇದು ಅನಿವಾರ್ಯವೇನೋ ಎಂಬ ಸ್ಥಿತಿಯಲ್ಲಿ ಈಗ ನಾವಿದ್ದೇವೆ ....
ಒಬ್ಬ ಗ್ರಾಮೀಣ ಕನ್ನಡ ಮದ್ಯಮದಿಂದ ಬಂದ ನನ್ನಂಥ ಹಲವರು ಅಭ್ಯರ್ಥಿಗಳು ಕನ್ನಡ ಮಾದ್ಯಮದಲ್ಲಿ ಓದಿದ್ದೆ ತಪ್ಪಾಯ್ತೇನೋ ಎಂದು ಬಹಳ ಸಾರಿ ಅನ್ನಿಸಿದೆ .ಯಾಕೆಂದರೆ ನಮ್ಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ಶಿಕ್ಷಕರು ಒಂದು ಸಾರಿ ಇಂಗ್ಲಿಷ್ ಪಠ್ಯ ಓದಿ ಯಾವುದೊ ಗೈಡ್ ನೋಡಿಕೊಂಡು ಒಮ್ಮೆಲೇ ಭಾವಾರ್ಥ ಓದಿ ಹೇಳಿ ಪಾಠ ಮುಗಿಸುತ್ತಿದ್ದರು .ಇಂಗ್ಲಿಷಿನ ಮುಲಪದಗಳನ್ನು ಪದಗಳನ್ನು ಕಲಿಯುವುದಕ್ಕೆ ಕಾಲೇಜಿನ ಮೆಟ್ಟಿಲೇರಬೇಕಾಯಿತು ..ಕನ್ನಡ ಮಾದ್ಯಮದಲ್ಲಿ ಓದಿ ಪಿಯುಸಿ ಗೆ ಬಂದು ವಿಜ್ಞಾನ ವಿಷಯವನ್ನು ಅಇಚ್ಚಿಕ ವಾಗಿ ತೆಗೆದುಕೊಂಡರೆ ಒಮ್ಮೆಲೇ ಕುದಿಯುವ ಬಾಣಲೆಗೆ ಬಿದ್ದಂಥ ಅನುಭವವಾಗುತ್ತದೆ ...
ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಬರಿಯ ಕನ್ನಡ ಭಾಷೆ ಒಂದು ಗೊತ್ತಿದ್ದರೆ ಬಾಳುವೆ ಮಾಡಲು ಸಾದ್ಯವಿಲ್ಲ ..ಅದು ಅಲ್ಲದೆ ಉದ್ಯೋಗವಕಶವು ಕಡಿಮೆ ..ಕನ್ನಡ ಮಾದ್ಯಮದಲ್ಲಿ ಓದಿದವರಿಗೆ ಒಂದು ರೀತಿಯ ಕೀಳರಿಮೆ ಬಂದುಬಿಡುತ್ತದೆ ...ಆಶ್ಚರ್ಯವೆಂದರೆ ಇಂದಿನ ಸ್ಥಿತಿಯಲ್ಲಿ ಯಾವ ಸ್ವಾಭಿಮಾನಿ ಕನ್ನಡಿಗನು ಕನ್ನಡ ಮಾದ್ಯಮದಲ್ಲಿ ಓಡಿಸಲು ದೈರ್ಯ ಮಾಡಲಾರ ..ಎಂಥಹ ಬಡವನಾದರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾದ್ಯಮದಲ್ಲಿ ಓದಿಸಲು ಪ್ರಯತ್ನಿಸುತ್ತಾನೆ ...
ಈ ನಾಡಿನ ಹಲವು ಕನ್ನಡಪರ ಹೋರಾಟಗಾರರು ,ಸಾಹಿತಿಗಳು ,ರಾಜಕಾರಣಿಗಳು ಕನ್ನಡದ ಉಳಿವಿನ ಬಗ್ಗೆ ಗಂಟೆ ಗಟ್ಟಲೆ ಭಾಷಣ ಬಿಗಿಯುತ್ತಾರೆ ಆದರೆ ಅವರಲ್ಲಿ ಎಷ್ಟುಜನ ತಮ್ಮ ಮಕ್ಕಳನ್ನು ಸರ್ಕಾರೀ ಶಾಲೆಯ ಕನ್ನಡ ಮಾದ್ಯಮದಲ್ಲಿ ಓದಿಸುತ್ತಿದ್ದಾರೆ? ಎಲ್ಲ ಉಳ್ಳವರು ,ಉತ್ತಮ ಇಂಗ್ಲಿಷ್ ಮಾದ್ಯಮದ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುತ್ತಿದ್ದಾರೆ ಆದರೆ ಕನ್ನಡ ಮಾದ್ಯಮದಲ್ಲಿ ಓದಿದ ವಿಧ್ಯಾರ್ಥಿಗಳು ಡಿಗ್ರಿ, ಡಬಲ್ ಡಿಗ್ರಿ ಓದಿದ್ದರು ಇಂಗ್ಲಿಷ್ ಭಾಷಾ ಮಾದ್ಯಮದ ಕೊರತೆಯಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹೆಣಗುತ್ತಿದ್ದಾರೆ.ಕೇವಲ ಗುಮಾಸ್ತ ಹುದ್ದೆಗೆ ಲಾಯಕ್ಕೆನೋ ಎಂಬಂಥ ವಾತಾವರಣ ಸೃಷ್ಟಿಸಲಾಗಿದೆ ...
ಕೇವಲ ಬಡವರು ಮತ್ತು ಸರ್ಕಾರೀ ಶಾಲೆಯಲ್ಲಿ ಓದುವವರು ಮಾತ್ರ ಯಾಕೆ ಕನ್ನಡ ಮಾದ್ಯಮದಲ್ಲಿ ಓದಬೇಕು?ನಮ್ಮ ಆಳುವ ವರ್ಗ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು "ನೀನು ಹೊಡೆದ ಹಾಗೆ ನಟಿಸು, ನಾನು ಅತ್ತ ಹಾಗೆ ನಟಿಸುತ್ತೇನೆ " ಎಂಬಂತೆ ವರ್ತಿಸುತ್ತಿವೆ ..ಇಂದಿನ ವ್ಯವಸ್ಥೆಯಲ್ಲಿ ಕನ್ನಡವನ್ನು ಪ್ರಾಮಾಣಿಕವಾಗಿ ಕಲಿಸುವ ಬದ್ದತೆಯನ್ನು ಶಿಕ್ಷಣ ಸಂಸ್ಥೆಗಳು ಪ್ರದರ್ಶಿಸಬೇಕಿದೆ ,ಅದೇ ರೀತಿ ಸರ್ಕಾರಗಳು ಕನ್ನಡವನ್ನು ಎಲ್ಲ ರಂಗಗಳಲ್ಲೂ ಅಳವಡಿಸಿ ಕನ್ನಡ ಕಲಿತವರಿಗೆ ಅವಕಾಶವನ್ನು ಕಲ್ಪಿಸಬೇಕಾಗಿದೆ .ಯುರೋಪಿನ ಹಲವಾರು ದೇಶಗಳು ತಮ್ಮ ಆಡಳಿತದಲ್ಲಿ ಸ್ಥಳೀಯ ಭಾಷೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿವೆ ಅದು ನಮ್ಮಲ್ಲೇಕೆ ಸಾದ್ಯವಿಲ್ಲ ಎನಿಸುತ್ತದೆ. ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡನ್ನು ಉತ್ತಮವಾಗಿ ಕಲಿಸಬೇಕಿದೆ ...ಇಲ್ಲವಾದರೆ ನಾವೆಷ್ಟೇ ಕನ್ನಡದ ಬಗ್ಗೆ ಅನುಕಂಪ ತೋರಿಸಿದರು ಅದು ಕೇವಲ ತೋರಿಕೆ ಎನಿಸುತ್ತದೆ,ಏಕೆಂದರೆ ಇಂದು ಕನ್ನಡವನ್ನು ಉಳಿಸಬೇಕಾದರೆ ಕನ್ನಡವನ್ನು ಅನ್ನವನ್ನು ದೊರಕಿಸಿಕೊಡುವ ಭಾಷೆಯನ್ನಾಗಿ ಮಾಡಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಇದೆ.
ಭಾಷೆ ಮತ್ತು ಅನ್ನ ಇವೆರಡನ್ನೂ ಒಂದು ಕಡೆ ಇಟ್ಟಾಗ ಮನುಷ್ಯ ಮೊದಲು ಅನ್ನವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಏಕೆಂದರೆ ಹಸಿವು ಭಾಷೆಗಿಂತ ಮುಖ್ಯ .ತನ್ನ ಹಸಿವು ನೀಗಿಸಿಕೊಳ್ಳಲು ಯಾವ ಭಾಷೆ ಅನುಕೂಲ ಮಾಡಿಕೊದುತ್ತದೋ ಆ ಭಾಷೆಯನ್ನು ಆತ ಆಯ್ಕೆ ಮಾಡುತ್ತಾನೆ . ರಾಷ್ಟ್ರ ಮಟ್ಟದಲ್ಲಿ "ಏಕರೂಪ ನಾಗರೀಕ ಸಂಹಿತೆ "ಒತ್ತಾಯಿಸುತ್ತಿರುವ ರಾಷ್ಟ್ರೀಯ ಪಕ್ಷಗಳು "ಏಕರೂಪ ಶಿಕ್ಷಣ ನೀತಿ"ಯನ್ನು ಯಾಕೆ ಒತ್ತಾಯಿಸುತ್ತಿಲ್ಲ .ಈ ಬಗ್ಗೆ ಎಲ್ಲರು ಚಿಂತಿಸಬೇಕಾದ ಅಗತ್ಯ ಇದೆ ...ಶಿಕ್ಷಣ ರಾಷ್ಟ್ರೀಕರಣವಾಗಲಿ ..ಕೇಂದ್ರ ಸರ್ಕಾರ ಇದರ ಬಗ್ಗೆ ಚಿಂತಿಸಲಿ ಮತ್ತು ಅಗತ್ಯ ಕಾನೂನು ರೂಪಿಸಲಿ..."ಎಲ್ಲರಿಗು ಸಮಬಾಳು ,ಸಮಪಾಲು"ದೊರಕಲು ಅವಕಾಶ ದೊರಕಿಸಲು ಆಳುವ ವರ್ಗಗಳು ಪ್ರಾಮಾಣಿಕ ಪ್ರಯತ್ನ ಮಾಡಲಿ.... ನೀವೇನ್ ಹೇಳ್ತಿರ ?
